ಲಲಿತ ಕಲೆ ಮಹತ್ವದ
Lalitalake mahavya ಪೀತಿಕೆ : ಮನುಷ್ಯನನ್ನು ಮಾನವನ್ನಾಗಿಸುವ ಬಹುಮುಖ್ಯ ಪರಿಕರಗಳಲ್ಲಿ ಲಲಿತಕಲೆಗಳ ಪಾತ್ರ ಮಹತ್ವನ್ಯಾವ ಲಲಿತಕಲೆಗಳು ಜೀವನಕ್ರಮವನ್ನು ಭವ್ಯತೆಗೆ ಒಯ್ಯುವ ಎಂದರೂ ತಪ್ಪಿಲ್ಲ. ಶಕ್ತಿಯನ್ನು ಪಡೆದಿದ್ದು, ಅವು ಮಾನವತಾವಾದದ ಅಭಿವ್ಯಕ್ತಿ ಲಲಿತಕಲೆಗಳು ವೃಷ್ಟಿ-ಸಮಷ್ಟಿಯ ಬೆಳೆವಣಿಗೆಗೆ ಪರಿಣಾಮಾರಿ ಸಾಧನಗಳಾಗಿವೆ. ಲಲಿತಕಲೆಗಳು ಮಾನವನಿಗೆ ಆನಂದಾನುಭೂತಿಯನ್ನು ನೀಡಿ ಮನಸ್ಸನ್ನು ಶಾಂತಗೊಳಿಸುವ ಸಾಧನಗಳಾಗಿದೆ.
ವಿಷಯ ನಿರೂಪಣೆ : ಲಲಿತಕಲೆಗಳು ಜನತೆಯ ಗೆಳೆಯ ಮತ್ತು ಶಿಕ್ಷಕ, ಬದುಕಿಗಿಂತ ಲಲಿತ ಕಲೆಗಳು ದೊಡ್ಡವು.
ಚಿತ್ರಕಲೆಯು ಕಲಾತ್ಮಕವಾದುದು. ಪ್ರಕೃತಿಯೊಳಗೆ ಅಡಗಿರುವ ಸಾಧ್ಯತೆಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಮನುಷ್ಯರು ನಡಿದಿದೆ. ಉದ್ದೇಶಪೂರ್ವಕ ಕ್ರಿಯೆಗಳೇ ಲಲಿತಕಲೆಗಳ ಅಭಿವ್ಯಕ್ತಿಗೆ ಕಾರಣ, ಬೌದ್ಧಿಕ ಕಸರತ್ತಿನ మనక ಜನರನ್ನು ಆಕರ್ಷಿಸಲು ಮನೋರಂಜನೆಯನ್ನು ನೀಡಲು ಹುಟ್ಟಿದವುಗಳೇ ಲಲಿತಕಲೆಗಳು. ಇವುಗಳ ಮೂಲ ಆನಂದವನ್ನು ಪಡೆಯುವುದಾಗಿದೆ. ಲಲಿತಕಲೆಗಳನ್ನು ಪಂಚಕಲೆಗಳೆಂದು ವರ್ಗೀಕರಿಸಲಾಗುತ್ತದೆ. ಅವು ಯಾವುವುವೆಂದರೆ ಸಂಗೀತ, ನೃತ್ಯ, ಶಿಲ್ಪ, ಚಿತ್ರ ಹಾಗೂ ಸಾಹಿತ್ಯ ಇವುಗಳು ಅನುಕ್ರಮವಾಗಿ ಸ್ವರ, ಅಭಿನಯ, ಶಿಲೆ, ಬಣ್ಣ, ಹಾಗೂ ಶಬ್ದ ಆಯಾಯ ಕಲೆಗಳ ಅಭಿವ್ಯಕ್ತ ಮಾಧ್ಯಮಗಳಾಗಿವೆ. ಗಾನ ಕೋಗಿಲೆ ಎಂ. ಎಸ್. ಸುಬ್ಬಲಕ್ಷ್ಮಿ ಅವರ ಸಂಗೀತ, ಡಾ. ರಾಜಕುಮಾರ ಅವರ ಅಭಿನಯ. ಚಾವುಂಡರಾಯ ನಿರ್ಮಿಸಿದ ಗೊಮ್ಮಟೇಶ್ವರ, ರವಿವರ್ಮನ ಚಿತ್ರಕಲೆ, ಕುವೆಂಪು ಸೃಜಿಸಿದ ರಾಮಾಯಣ ದರ್ಶನಂ ಇವುಗಳನ್ನು ಸಾಂದರ್ಭಿಕವಾಗಿ ಉದಾಹರಿಸಬಹುದಾಗಿದೆ. ಇವುಗಳ ಆಕರ ಪರಿಕರಗಳೆಂದರೆ ಪ್ರತಿಭೆ, ಸ್ವಯಂ ಕಲ್ಪನೆ, ಸತತ ಅಭ್ಯಾಸ. ಈ ಲಲಿತಕಲೆಗಳು ನಮ್ಮ ಪರಂಪರೆಯಲ್ಲಿ ಬೆರೆತು ಹೋಗಿವೆ. ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಈ ಲಲಿತಕಲೆಗಳು ಸಾಕ್ಷಿಯಾಗಿವೆ. ಬಹುಸಂಸ್ಕೃತಿಯಲ್ಲಿ ರೂಪುಗೊಳ್ಳುವ ಲಲಿತಕಲೆಗಳು ವೈವಿಧ್ಯಮಯವಾಗಿರುತ್ತವೆ. ಆದರೆ ಇಂದು ಇಡೀ ಜಗತ್ತಿಗೆ ಒಂದೇ ರೀತಿಯ ಲಲಿತಕಲೆಗಳು ರೂಪುಗೊಳ್ಳುತ್ತಿರುವುದು ಬಹುಸಂಸ್ಕೃತಿಯ ನಾಶಕ್ಕೆ ಕಾರಣವಾಗುತ್ತಿದೆ.
ಉಪಸಂಹಾರ :
ಆಧುನಿಕತೆ ಹಾಗೂ ಜಾಗತೀಕರಣದ ಸಂದರ್ಭದಲ್ಲಿ ಲಲಿತಕಲೆಗಳು ನಶಿಸಿಹೋಗುವ ಬಂತವನ್ನು ತಲುಪುತ್ತಿರುವುದು ದುರಂತವೇ ಸರಿ, ಲಲಿತಕಲೆಗಳಲ್ಲಿ ವೈವಿಧ್ಯತೆಯು ಕಡಿಮೆಯಾಗುತ್ತಿದೆ. ಅವುಗಳಿಗೆ ಸರಿಯಾಗ ಪ್ರೋತ್ಸಾಹವು ದೊರೆಯದೆ ಸೊರಗಿ ಹೋಗುತ್ತಿವೆ. ನಮ್ಮ ನೆಲದ ಸಾಂಸ್ಕೃತಿಕ ಸತ್ವವು ಉಳಿಯಬೇಕಾದರೆ ಲಲಿತಕಲೆಗಳಿಗೆ ಸರಿಯಾದ ಪ್ರೋತ್ಸಾಹವನ್ನು ನೀಡುವುದು ಸರ್ಕಾರದ ಮತ್ತು ಜನರ ಆದ್ಯ ಕರ್ತವ್ಯವಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.